ಕಣಜ

ಆ ಮನೆಯ ಕಣಜ ನಮಗೆ,
ದಿನಾರಾತ್ರೆ  ಒಂದೊಂದು ನೀತಿಕಥೆಯನ್ನು ಹೇಳು ತ್ತಿತ್ತು;
ಕೇಳಿಸಿಕೊಳ್ಳುತ್ತಿದ್ದದ್ದು ಮಾತ್ರ ಅವರಾಗಿದ್ದರು.

ಅವರೆಕಾಳು, ರಾಗಿ, ಗೋಧಿ, ತೊಗರಿ, ಹೆಂಡ, ಹಳೆಬಟ್ಟೆಗಳು,
ಔಷಧಿ ಬೇರುಗಳೆಲ್ಲವನ್ನೂ ತನ್ನೊಳಗೆ ಹೊತ್ತುಕೊಂಡು,
ದೂರದ ಗ್ರಾಮದ ದಢೂತಿ ಹೆಂಗಸಿನಂತೆ ಕಂಗೊಳಿಸುತ್ತಿತ್ತು.

ಅದನ್ನು ಕಟ್ಟಿದ ಆ ಓಣಿಯ ಅವನೋ,
ಸಂತೆಯಿಂದ ಬಿದಿರುಕಾಡನ್ನು ಬಳಸಿಕೊಂಡು ಇತ್ತ ಬರುತ್ತಿದ್ದಂತೆ-
ಆ ಕಣಜವನ್ನು ಬಾಯಿಗೆ ಬಂದಂತೆ ಬೈಯ್ಯುವುದನ್ನು ರೂಢಿ ಮಾಡಿಕೊಂಡಿದ್ದ.

ನಾವೆಲ್ಲರೂ ಎದ್ದೇಳುವ ಮುಂಚಿತವೇ ಅವನು ತನ್ನದೆಲ್ಲವನ್ನೂ
ಆರಂಭಿಸಿರುತ್ತಿದ್ದನೇನೊ.

ಏಕೆಂದರೆ, ಆಗ ಅವನು ಅಳುತ್ತಾ ನಡೆದುಹೋಗುತ್ತಿದ್ದ.

ಅಪ್ರಾಕೃತ ಸಾವಿನಿಂದ ಅವನು ಸತ್ತರೂ
ಆ ಕಣಜದ ನೀತಿಕಥೆಗಳು ಮಾತ್ರ ಮುಗಿದಿರಲಿಲ್ಲ,
ನಾವು ಬೆಳೆಯುವುದು ಕುಗ್ಗಲಿಲ್ಲ;

ನಮ್ಮ ನಡುವಿನ ಅವರು (ಕತೆ ಕೇಳಿಸಿಕೊಳ್ಳುತ್ತಿದ್ದವರು)
ಸಾಯುವುದೂ ಕಡಿಮೆಯಾಗಲಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಲರೂಪಿನಗು
Next post ಸೂಜಿಯೇ ನೀನು ಸೂಜಿಯೇ

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

cheap jordans|wholesale air max|wholesale jordans|wholesale jewelry|wholesale jerseys